Skip to main content

ಮುಕ್ತಾ ಶಿಖರ - ಹಿಮಾಲಯದಲ್ಲಿನ ಒಂದು ನವೀನ ಚಾರಣ ಮಾರ್ಗ.


ಮುಕ್ತಾ ಶಿಖರ - ಹಿಮಾಲಯದಲ್ಲಿನ ಒಂದು ನವೀನ ಚಾರಣ ಮಾರ್ಗ.

ಈ ಚಾರಣವು ಚಳಿಗಾಲದ ಕೇದಾರಕಾಂತ, ದಯಾರ ಬುಗ್ಯಾಲ್, ಹಾಗೂ ಚಂದ್ರಶಿಲಾ ಗುಂಪಿಗೆ ಸೇರಿದ ಉತ್ತರಾಖಂಡದಲ್ಲಿನ ನೂತನ ಚಾರಣ ಮಾರ್ಗ. ಇದು ಒಂದು ಅತ್ಯಂತ ಸುಂದರ ಹಾಗೂ ಅದ್ಭುತವಾದ ಚಾರಣ ಮತ್ತು ಈ ಚಾರಣದಲ್ಲಿ ಚಾರಣಿಗರನ್ನು ಮೋಡಿಮಾಡುವ ಅರಣ್ಯಗಳು, ಹುಲ್ಲುಗಾವಲುಗಳು, ಭವ್ಯವಾದ ಪರ್ವತ ಶಿಖರಗಳ ನೋಟಗಳು ಮತ್ತು ಅತ್ಯಂತ ತೃಪ್ತಿಕರವಾದ ಶಿಖರಾರೋಹಣದಿಂದ ಕೂಡಿದ್ದು ಹಾಗೂ ಇದು ಸಂಪೂರ್ಣವಾಗಿ ನಿರ್ಜನವಾದದ್ದು. ಅದೇ ಮುಕ್ತಾ ಶಿಖರ.

ಬೇರೆ ಚಾರಣಗಳಂತಲ್ಲದೆ, ಇದು ಸ್ವಲ್ಪ ಕೆಳಮಟ್ಟದಿಂದ ಪ್ರಾರಂಭವಾಗುವುದು. ಹೀಗಾಗಿ ಇದು ಚಾರಣಿಗರು ಹಿಮಾಲಯದಲ್ಲಿನ ಸಂಪೂರ್ಣವಾಗಿ ಬೇರೆಯದೇ ಆದ ಕಾಡುಗಳನ್ನು ವೀಕ್ಷಿಸಲು ಅನುವು ಮಾಡಿಕೊಡುವುದು. ಉದಾಹರಣೆಗೆ, ಈ ಮಾರ್ಗದಲ್ಲಿ ಬಿದಿರಿನಿಂದ ಕೂಡಿದ ಕಾಡು ಒಂದು ವೈಶಿಷ್ಟ್ಯತೆಯಿಂದ ಕೂಡಿದ್ದು.

ಮೇಲೆ ಮೇಲೆ ಚಾರಣ ಮಾಡುತ್ತಿದ್ದಂತೆ ನಮಗೆ ರೋಡೋಡೆಂಡ್ರಾನ್, ಮ್ಯಾಪಲ್, ಪುರಾತನ ಓಕ್ ಹಾಗೂ ಪೈನ್ ವೃಕ್ಷಗಳು ಎದುರಾಗುವುದು. ಇಲ್ಲಿನ ಕಾಡುಗಳು ಅತ್ಯಂತ ದಟ್ಟವಾಗಿರುವುದು.

ಮತ್ತೊಂದು ವೈಶಿಷ್ಟ್ಯವೆಂದರೆ ಈ ಚಾರಣದಲ್ಲಿ ಸಂಪೂರ್ಣವಾಗಿ ಎರಡು ದಿನಗಳು ಕಾಡಿನಲ್ಲೇ ನಡೆಯಬೇಕು. ಬೇರೆ ಚಾರಣಗಳಲ್ಲಿ 3-4 ಘಂಟೆಗಳ ಕಾಡಿನ ನಡಿಗೆ ಇರುವುದು. ಇದರಲ್ಲಿನ ಲಾಭವೆಂದರೆ ಮರಗಳ ನೆರಳಿನಲ್ಲಿ ಚಾರಣ ಮಾಡುವುದು. ಇತ್ತೀಚಿನ ದಿನಗಳಲ್ಲಿ ಚಂದ್ರಶಿಲಾ ಚಾರಣ ಮಾರ್ಗವನ್ನು ಅರಣ್ಯ ಇಲಾಖೆಯವರು ಮುಚ್ಚಿರುವುದರಿಂದ ಮುಕ್ತಾ ಶಿಖರ ಚಾರಣವು ಅದಕ್ಕೆ ಸೂಕ್ತ ಬದಲಿ ಮಾರ್ಗವಾಗಿದೆ.

ಈ ಮಾರ್ಗವು ಸಂಪೂರ್ಣವಾಗಿ ವಿವಿಧ ವೃಕ್ಷಗಳಿಂದ ಕೂಡಿರುವುದರಿಂದ, ಮಾರ್ಗದಲ್ಲಿ 20 ವಿಧದ ಅನೇಕ ಜಾತಿಯ ಪಕ್ಷಿಗಳನ್ನು ವೀಕ್ಷಿಸಬಹುದು. ಅವುಗಳಲ್ಲಿ ಉತ್ತರಾಖಂಡದ ರಾಜ್ಯ ಪಕ್ಷಿ - ಭವ್ಯವಾದ ಹಿಮಾಲಯದ ಮೊನಲ್, ರಸೆಟ್ ಸ್ಪಾರೋಸ್, ಬ್ಲೂ ವಿಷಲಿಂಗ್ ತೃಷೆಸ್, ಹಿಮಾಲಯನ್ ಬುಲ್ ಬುಲ್, ಲೆಮೆನ್ ರಂಪಡ್ ವಾರ್ಬ್ಲ್ಯಾರ್ಸ್ ಇತ್ಯಾದಿ ಪಕ್ಷಿಗಳನ್ನು ನೋಡಲು ಅವಕಾಶ ಇರುವುದು. ಪಕ್ಷಿಪ್ರಿಯರಿಗೆ ಹಾಗೂ ಕವಿಗಳಿಗೆ ಇದು ಸ್ವರ್ಗ ಸಮಾನ ಚಾರಣ.

ಇದಲ್ಲದೇ ಅರಣ್ಯ ಮಾರ್ಗದಲ್ಲಿ ಚಾರಣಿಗರಿಗೆ ಬಾರ್ಕಿಂಗ್ ಡೀರ್, ಬ್ಲಾಕ್ ಬೇರ್ಸ್, ಬಾರಾಸಿಂಗ ಪ್ರಾಣಿಗಳನ್ನೂ ವೀಕ್ಷಿಸಬಹುದು.

ಚಳಿಗಾಲದಲ್ಲಿ ಕಾಡಿನ ಹಾದಿಯನ್ನು ಕ್ರಮಿಸಿ ಮೇಲೇರುತ್ತಿದ್ದಂತೆ ಮಾಯಾಲೋಕದಲ್ಲಿನಂತೆ ಹಿಮದಿಂದ ಕೂಡಿದ ವಿಶಾಲ ಪ್ರದೇಶವು ಧುತ್ತೆಂದು ನಿಮ್ಮ ಮುಂದೆ ತೆರೆದುಕೊಳ್ಳುವುದು. ಚಾರಣಿಗರಿಗೆ ಇದು ಒಂದು ಅದ್ಭುತವಾದ ಅನುಭವವನ್ನು ತಂದುಕೊಡುವುದು. ಅಲ್ಲದೇ ಇಲ್ಲಿಂದ ಹಿಮಾಲಯದಲ್ಲಿನ 6000 - 7000 ಮೀಟರ್ ಎತ್ತರದ ಅನೇಕ ಹಿಮ ಶಿಖರಗಳನ್ನು ವೀಕ್ಷಿಸಬಹುದು. ಅವುಗಳಲ್ಲಿ ಪ್ರಮುಖವಾದದ್ದು - jaonli (6632 ಮೀ), ಗಂಗೋತ್ರಿ ಶಿಖರ (6577 ಮೀ), ಕಾಲಾನಾಗ್ ಪರ್ವತ (6387 ಮೀ), ಬಂದರ್ ಪೂಂಚ್ -1 (6316 ಮೀ), ಹಾಗೂ ಬಂದರ್ ಪೂಂಚ್ - 2 (6102 ಮಿ), draupadi ka danda - 1 ಮತ್ತು 2 (5716 ಮತ್ತು 5670 ಮೀ), ಹಾಗೂ ನೀವು ಚಾರಣ ಮಾಡಬಹುದಾದ ನಾಗ್ ತಿಬ್ಬ ಶಿಖರ (3022 ಮೀ).

ಮುಕ್ತಾ ಶಿಖರ ಮಾರ್ಗವನ್ನು ಇದುವರೆಗೂ ಯಾರೂ ಕ್ರಮಿಸಿಲ್ಲ. ಹಾಗಾಗಿ ಇದು ಕಚ್ಚಾ ಮಾರ್ಗ ಹಾಗೂ ನೀವೇ ಮೊದಲಿಗರಾಗಬಹುದು.

ಚಾರಣದ ಸಂಕ್ಷಿಪ್ತ ಮಾರ್ಗದರ್ಶಿ :

ಮೊದಲನೇ ದಿನ : ಡೆಹ್ರಾಡೂನ್ ನಿಂದ ಗಂಗೋತ್ರಿ - ಕಾರಿನಲ್ಲಿ ಪಯಣ - 6-7 ಘಂಟೆ, 155 ಕಿ.ಮೀ- ತಲಪುವ ಎತ್ತರ - 4500 ಅಡಿ.

ಎರಡನೇ ದಿನ : ಗಂಗೋತ್ರಿಯಿಂದ ಕುಫ್ಹ್ಲಾನ್ ವರೆಗೂ 20 ನಿಮಿಷಗಳ ಕಾರಿನಲ್ಲಿನ ಪಯಣ, ನಂತರ ಶಿಲಾದುನಿ ಶಿಬಿರದವರೆಗೂ 4 ಘಂಟೆಗಳ 4 ಕಿ.ಮೀ ಚಾರಣ. ಆರೋಹಣ - 4500 ಇಂದ 6782 ಅಡಿ (2282 ಅಡಿ).


ಮೂರನೇ ದಿನ : ಶಿಲಾದುನಿಯಿಂದ ಚೈತಥಾರ್ ಶಿಬಿರದೆಡೆಗೆ - 5-6 ಘಂಟೆಗಳ 5 ಕಿ.ಮೀ ತೀವ್ರವಾದ ಆರೋಹಣದಿಂದ ಕೂಡಿದ (3000 ಅಡಿಗಳ ಎತ್ತರವನ್ನು ಏರಬೇಕು) ಮಾರ್ಗ. ಇದು ಅತಿ ಕಷ್ಟಕರವಾದ ಮಾರ್ಗ.

ನಾಲ್ಕನೇ ದಿನ : ಚೈತಥಾರ್ ನಿಂದ ಮುಕ್ತ ಸರೋವರದೆಡೆಗೆ - 1200 ಅಡಿ ಆರೋಹಣ - 4 ಘಂಟೆಗಳಿಂದ ಕೂಡಿದ 4 ಕಿ.ಮೀ ಚಾರಣ. ಮಾರ್ಗವು ಕ್ರಮೇಣ ಆರೋಹಣದಿಂದ ಕೂಡಿದ್ದು, ಮಧ್ಯಮ ದರ್ಜೆಯದು. ಈ ಪ್ರದೇಶದಿಂದ ಮೊತ್ತ ಮೊದಲಿಗೆ ನಮಗೆ ಬಂದರ್ ಪೂಂಚ್, ಕಾಲಾನಾಗ್ ಹಾಗೂ ನಾಗ ತಿಬ್ಬ ಶಿಖರಗಳನ್ನು ವೀಕ್ಷಿಸಬಹುದು.

ಐದನೇ ದಿನ : ಮುಕ್ತಾ ಸರೋವರದಿಂದ ಮುಕ್ತಾ ಶಿಖರವನ್ನು ತಲುಪಿ ನಂತರ ಕುವರಿ ಪ್ರದೇಶವನ್ನು 1000 ಅಡಿ ಏರಿ, 4100 ಅಡಿ ಇಳಿಯುವುದರಿಂದ ಕೂಡಿದ 6-7 ಘಂಟೆಗಳ 9 ಕಿ.ಮೀ ಹಾದಿಯನ್ನು ಕ್ರಮಿಸಬೇಕು. ಹಾದಿಯು ಮಧ್ಯಮ ದರ್ಜೆಯಿಂದ ಕೂಡಿದ್ದು, ಕೆಲವು ಕಡೆ ತೀವ್ರವಾದ ಆರೋಹಣ ಹಾಗೂ ಕ್ರಮೇಣ ಅವರೋಹಣದಿಂದ ಕೂಡಿರುವುದು. ಮುಕ್ತಾ ಶಿಖರದಲ್ಲಿ ಸಿಯಾರಿ ಸರೋವರವನ್ನು ವೀಕ್ಷಿಸಬಹುದು. ಈ ಸ್ಥಳದಿಂದ ಮೇಲೆ ತಿಳಿಸಿದ ಎಲ್ಲ ಶಿಖರಗಳನ್ನೂ 360 ಡಿಗ್ರಿ ಆಕಾಶದಲ್ಲಿ ನೋಡಬಹುದು.

ಆರನೇ ದಿನ : ಕುವರಿಯಿಂದ ಕುಫ್ಹ್ಲಾನ್ ಚಾರಣ, ಅನಂತರ ಡೆಹ್ರಾಡೂನ್ ಗೆ ಕಾರಿನಲ್ಲಿ ಪ್ರಯಾಣ - 4 ಘಂಟೆಗಳ 6 ಕಿ.ಮೀ ಚಾರಣ ಹಾಗೂ 6 ಘಂಟೆಗಳ 155 ಕಿ.ಮೀ ಕಾರಿನಲ್ಲಿನ ಪ್ರಯಾಣ.

ಚಾರಣ ಪ್ರಿಯರೆಲ್ಲರೂ ತಪ್ಪದೇ ಚಾರಣ ಮಾಡಲೇ ಬೇಕಾದ ಒಂದು ಅತಿ ಸುಂದರ ಚಾರಣ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - indiahikes.com
ಮಾಹಿತಿ ಸಂಗ್ರಹಣೆ : ಗುರುಪ್ರಸಾದ್ ಹಾಲ್ಕುರಿಕೆ




Comments

Popular posts from this blog

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ ...

ಔoಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು

ಔ o ಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು   ಈ ಮಂದಿರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಟನೆಯದು . ಈ ಮಂದಿರವನ್ನು ಯಾದವ ವಂಶಸ್ಥ ಸ್ಯುನ ಎಂಬುವವನು ಕ್ರಿ . ಶ . 13 ನೇ ಶತಮಾನದಲ್ಲಿ ಮರುನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ . ಮೂಲ ಮಂದಿರವನ್ನು ಪಾಂಡವಾಗ್ರಜ ಯುಧಿಷ್ಠಿರನು 14 ವನವಾಸದ ಸಮಯದಲ್ಲಿ ನಿರ್ಮಿಸಿದನೆಂದೂ ಹಾಗೂ ಔರಂಗಜೇಬನು ಈ ಮಂದಿರವನ್ನು ನಾಶಮಾಡುವ ಸಮಯದಲ್ಲಿ ಇದು ಏಳು ಅಂತಸ್ತಿನಿಂದ ಕೂಡಿತ್ತೆಂದು ಇತಿಹಾಸವು ತಿಳಿಸುತ್ತದೆ . ಈ ಮಂದಿರವನ್ನು ಹೇಮದ್ ಪಂಥಿ ಶೈಲಿಯಲ್ಲಿ ನಿರ್ಮಿಸಲಾಗಿದೆ . ಈ ಮಂದಿರದೊಂದಿಗೆ ಹಿಂದುಗಳ ವಾರ್ಕಾರಿ ಪಂಥದ ಸಂತರುಗಳಾದ ನಾಮದೇವ್ , ವಿಠೋಬ ಖೇಚ್ಛಾ , ಜ್ಞಾನೇಶ್ವರರ ಹೆಸರುಗಳು ಹಾಸುಹೊಕ್ಕಾಗಿದೆ . ಒಮ್ಮೆ ನಾಮದೇವನು , ಸಂತ ವಿಠೋಬನು ಈ ಮಂದಿರದೊಳಗಿರುವ ಶಿವಲಿಂಗದ ಮೇಲೆ ತನ್ನ ಕಾಲನ್ನು ಇಟ್ಟು ಮಲಗಿರುವುದನ್ನು ಕಂಡು ಆಕ್ಷೇಪಿಸಿದನು . ಅದಕ್ಕೆ ವಿಠೋಬನು ನಾಮದೇವನಿಗೆ ತನ್ನ ಕಾಲನ್ನು ಬೇರೆ ಎಲ್ಲಾದರೂ ಇಡಲೆಂದು ಸೂಚಿಸಿದನು . ಹಾಗೇ ಕಾಲನ್ನು ಎಲ್ಲಿ ಇಟ್ಟರೂ ಅಲ್ಲಿ ಕಾಲಿನ ಕೆಳಗೆ ಲಿಂಗವು ಉಧ್ಭವವಾಗುತ್ತಿತ್ತು . ವಿಠೋಬನು ತನ್ನ ಯೋಗಶಕ್ತಿಯಿಂದ ಮಂದಿರದೊಳಗೆಲ್ಲಾ ಲಿಂಗವನ್ನು ಸೃಷ್ಟಿಸಿ ಭಗವಂತನು ಸರ್ವಾ o ತರ್ಯಾಮಿ ಎಂಬ ವಿಷಯವನ್ನು ನಾಮದೇವನಿಗೆ ಮನವರಿಕೆ ಮಾಡಿಕೊಟ್ಟನು . ಈ ಕ್ಷೇತ್ರವನ್ನು ದಾರುಕಾವನವೆಂದೂ ಕರೆಯಲ್ಪಟ್ಟಿದೆ . ಈ ಮಂದಿರದಲ್ಲಿ ...

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು ಏಪ್ರಿಲ್ 22 ರಂದು ಸ್ಯಾನ್ ಫ್ರಾನ್ಸಿಸ್ಕೊ   ವಿಮಾನದಲ್ಲಿ ಬಂದು ಅಲ್ಲಿಂದ 40 ಮೈಲಿ ದೂರದ ಸನ್ನಿವೇಲ್ ನಗರಕ್ಕೆ ಬಂದು ನನ್ನ ಮಗನ ಮನೆಗೆ ತಲುಪಿದ ನಂತರ ಎರಡು ದಿನ ವಿಶ್ರಾ o ತಿಯ ನಂತರ ಶನಿವಾರದಂದು ನನ್ನನ್ನು   ನನ್ನ ಮಗನು ಇಲ್ಲಿಂದ 40 ಮೈಲಿ ದೂರದಲ್ಲಿರುವ ಲ್ಯಾಂಡ್ ಆಫ್ ಮೆಡಿಸನ್ ಬುದ್ಧ ಎಂಬ ಸುಂದರ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದನು . ಅಲ್ಲಿಗೆ ಹೋಗುವ ಮೊದಲು ಆ ಪ್ರದೇಶದ ಬಗ್ಗೆ ಕೆಲವು ವಿವರಗಳನ್ನು ಇಂಟರ್ನೆಟ್ ಮೂಲಕ ತಿಳಿದುಕೊಂಡೆ . ಅದರ ಸಂಕ್ಷಿಪ್ತ ವಿವರಣೆ ಹೀಗಿದೆ : ಈ ಪ್ರದೇಶವು ಸಾಂತಾಕ್ರೂಜ್ ಪರ್ವತದ ತಪ್ಪಲಿನಲ್ಲಿರುವ ಸೋಕ್ವಿಲ್ ಹಳ್ಳಿಯಿಂದ ಒಂದೂವರೆ ಮೈಲಿ ದೂರದಲ್ಲಿ ಸುಂದರ ಅರಣ್ಯ ಪ್ರದೇಶದಲ್ಲಿದೆ . ಇಲ್ಲಿ ಉಪನ್ಯಾಸ , ಧ್ಯಾನ , ಪ್ರಾರ್ಥನೆ , ಏಕಾಂತದಲ್ಲಿ ಉಳಿದುಕೊಳ್ಳುವ ಅನುಕೂಲವುಳ್ಳ ಹಾಗೂ ಸಮುದಾಯ ಸೇವೆಯ ಕಾರ್ಯಕ್ರಮಗಳನ್ನು ನಡೆಸಲಾಗುವುದು . ಹೆಸರೇ ಹೇಳಿರುವಂತೆ ಇದು ಮಹಾಯಾನ ಬೌದ್ಧ ಪರಂಪರೆಗೆ ಸೇರಿದ್ದು . ಇಲ್ಲಿ 6 ಮೈಲಿ ಸುತ್ತಳತೆಯ ಚಾರಣ ಮಾಡಲು ಹಾದಿಯಿರುವ (TREKKING TRAIL) ವಿಷಯವನ್ನು ತಿಳಿದು ಅಲ್ಲಿ ಕೆಲವು ದೂರ ನಡೆದೆವು . ಈ ಹಾದಿಯು ಕಡಿದಾದ ಏರುವಿಕೆಯನ್ನು ಹೊಂದಿದ್ದು ನನ್ನ ಪತ್ನಿಗೆ ಬಹಳ ದೂರ ನಡೆಯಲು ಸಾಧ್ಯವಾಗದಿದ್ದರಿಂದ 2 ಮೈಲಿ ನಡೆದು ಮರಳಿದೆವು . ಅಲ್ಲಿ ಕಂಡ ಕೆಲವು ಸುಂದರ ದೃಶ್ಯಗಳನ್ನು ಈ ಕೆಳಗೆ...